ಅರಿವಿಗಾಗಿ ಗುರುವಿನೆಡೆಗೆ
ತಪಸ್ಸಿಗೆಂದು ಬೋಧಿ ವೃಕ್ಷದ ಕೆಳಗೆ ಕುಳಿತಾಯ್ತು
ಈ ಸಂತೆಯಿಂದ ದೂರ ಸರಿದು ಕಾಡು ಸೇರಾಯ್ತು
ಜಪ ತಪವೆಂದೆಲ್ಲ ಸಮಯ ಕಳೆದಾಯ್ತು ವಿಜ್ಞಾನವ ತಿಳಿದಾಯ್ತು
ತಂತ್ರ ಮಂತ್ರವ ಅಳೆದಾಯ್ತು
ಪಂಚ ಭೂತಗಳೊಂದಿಗೆ ಸಂಘರ್ಷ ಮಾಡಿದರೂ ಕಾಣಲಿಲ್ಲ ಬೆಳಕು?
ಸೋತು ಅಲೆಮಾರಿಯಾಗಿ ಅಲೆಯುತ್ತಿದ್ದೆ
ಗೊಂದಲದ ಗೂಡಿನಲ್ಲಿ ಬಂದಿಯಾಗಿದ್ದೆ
ತಿರಸ್ಕಾರದ ಮನಸ್ಸು ಬುದ್ದಿಯ ಕಟುಕಿತ್ತು
ಅಂದು.! ಮುಸ್ಸಂಜೆಯ ಮಳೆಯಲ್ಲಿ ನಿನ್ನ ಕಂಡ ನಾನು
ಒಲವಿನ ಬಲೆಯಲ್ಲಿ ಸಿಲುಕಿ ನಿನಗಾಗಿ ಹಂಬಲಿಸಿದಾಗ
ನೀ ಬಂದು ನನ್ನ ಬಿಗಿದಪ್ಪಿ ಕಾದ ತುಟಿಗಳಿಂದ ಚುಂಬಿಸಿದಾಗ
ಪಂಚೇಂದ್ರಿಯಗಳು ಹತ್ತಿ ಉರಿದಿತ್ತು
ಆ ಕ್ಷಣ ನಾನು ನಾನಲ್ಲ ನೀನು ನೀನಲ್ಲ
ಭೂತ ಮಾಯವಾಗಿ, ಭವಿಷ್ಯ ಕುರುಡಾಗಿ, ಕಾಲ ಕರಗುತಿತ್ತು...
ನೀ ನನ್ನ ಗುರುವಾಗಿದ್ದೆ. ನಾ ನಿನ್ನ ಮಗನಾಗಿದ್ದೆ
ರಾಜಿ. 4-10-2003
ಕಬ್ಬಿಣದ ಸರಳುಗಳ ಹಿಂದೆ
ಕನಸುಗಳ ಬಂಧನದಲ್ಲಿರುವ
ಆ ಎರಡು ಬೆಳಕಿನ ಕಿಟಕಿಯಲ್ಲಿ
ಕಂಡ ಜಗತ್ತುಗಳೆಷ್ಟೊ?
ಕಾಣದ ಲೋಕಗಳೆಷ್ಟೊ
ರಾಜಿ.
ಮರಳುಗಾಡಿನಲ್ಲಿ ಮೋಡಗಳು ಚದುರಿ
ನೆಲವು ಇಬ್ಬನಿಯ ಹೀರಿದಾಗ
ಒಣಗಿದ್ದ ಬೀಜ ಮೊಳೆತಿತ್ತು
ರಾಜಿ.